ಮಿನಿಸ್ಟ್ರು ಮೀಟಿಂಗ್ ಗೆ ಡೋಂಟ್ ಕೇರ್,, ಜಾಲಿ ಮೂಡ್ ನಲ್ಲಿ ಅಧಿಕಾರಿಗಳು

ಡೆಸ್ಕ್
1 Min Read

ತುಮಕೂರು: ಜನರ ಕಷ್ಟಗಳನ್ನು ಕಡಿಮೆ ಮಾಡುವುದು ಹೇಗೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡುವಾಗಲೇ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲ ಅನ್ನೋ ರೀತಿ ರೀಲ್ಸ್ ನೋಡುವುದರಲ್ಲಿ ಕಳೆದು ಹೋಗಿದ್ದರು.

ನಗರದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಗೂ ನಮಗೂ ಸಂಬಂಧವೇ ಇಲ್ಲ ಅನ್ನೋ ರೀತಿಯಲ್ಲಿ ಅಧಿಕಾರಿಗಳು ಸಭೆಯಲ್ಲಿ ರೀಲ್ಸ್ ನೋಡುತ್ತ ಮುಳುಗಿ ಹೋಗಿದ್ದರು.

ಕಂದಾಯ ಇಲಾಖೆ ಪ್ರಗತಿ ಸಾಧಿಸದ ಬಗ್ಗೆ ಸಚಿವರು ಸಿಡಿಮಿಡಿಗೊಂಡು ಮೇಲಾಧಿಕಾರಿಗಳನ್ನು ಬೈಯುತ್ತಿದ್ದರೆ ಕೆಲಸ ಮಾಡಬೇಕಾದ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ಅಧಿಕಾರಿಗಳು ಮಾತ್ರ ರೀಲ್ಸ್ ನಿಂದ ಹೊರಗೆ ಬರದೇ ಸಂಪೂರ್ಣವಾಗಿ ಮುಳುಗಿ ಹೋಗಿರುವುದನ್ನು ಗಮನಿಸಿದ ಮಾಧ್ಯಮದವರು ವಿಡಿಯೋ ಮಾಡುತ್ತಿದ್ದನ್ನು ಗಮನಿಸಿದ ಮೇಲಾಧಿಕಾರಿಗಳು ಮೊಬೈಲ್ ನೋಡದಂತೆ ಎಚ್ಚರಿಕೆ ನೀಡಿದರು.

ತುಮಕೂರು ತಾಲ್ಲೂಕಿನ ಕಂದಾಯ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಸಭೆಯಿಂದ ಹೊರಗೆ ಉಳಿದರೆ ಸಭೆಯಲ್ಲಿದ್ದ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.

Share this Article
Verified by MonsterInsights