ಭೀಕರ ಅಪಘಾತ ಐವರು ಸಾವು

ಡೆಸ್ಕ್
1 Min Read
ಮಧುಗಿರಿ : ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ  ಐದು ಜನರು ಮೃತಪಟ್ಟಿರುವ ಘಟನೆ ಸಂಜೆ 6ರ ಸಮಯದಲ್ಲಿ ನಡೆದಿದೆ.
ತಾಲೂಕಿನ ಕಸಬಾ ವ್ಯಾಪ್ತಿಯ ಕೊರಟಗೆರೆ ಮಧುಗಿರಿ ಗಡಿ ಭಾಗದ ಕೆ ಶಿಫ್ ರಸ್ತೆಯ ಸಮೀಪದ ಕಾಟಗಾನ ಹಟ್ಟಿಯ ಬಳಿ ದುರ್ಘಟನೆ ನಡೆದಿದೆ.
ಪಾವಗಡದ ಎತ್ತನಹಳ್ಳಿ ಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಹಾಗೂ ತುಮಕೂರಿ ನಿಂದ ಬರುತ್ತಿದ್ದ ಮತ್ತೊಂದು ಕಾರಿನ ನಡುವೆ ಪರಸ್ಪರ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಪಾವಗಡ ತಾಲೂಕಿನ ಎತ್ತನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ ( 50 ) ಇವರ ಪುತ್ರಿ ಸಿಂಧೂ (40) ಮಗ ಟ್ರಯಾಕ್ ದೇವಾ (8)
ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ಗ್ರಾಮದವರಾದ ಚಾಲಕ ಸಿದ್ದಗಂಗಪ್ಪ ( 34) ಹಾಗೂ ನಾಗರಾಜು (30) ಸೇರಿ ಒಟ್ಟು 4 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಟ್ರಾಯಕ್ಸ್ ದೇವಾ (8) ವರ್ಷದ ಗಂಡು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆಂದು ಎತ್ತಿನಹಳ್ಳಿಯ ಗೀತಾ (38) ಅವರ ಪುತ್ರ ಯೋಧ , ಚಾಲಕ ಆನಂದ್ ಹಾಗೂ ಮೃತ ಸಿಂಧೂ ರವರ ಒಂದು ವರ್ಷ ಪ್ರಾಯದ ಗಂಡು ಮಗು ವನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.
ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಮೃತಪಟ್ಟ ದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
Share this Article
Join Our WhatsApp Group
What do you like about this page?

0 / 400

Verified by MonsterInsights