ಅತ್ಯಾಚಾರ ಮಾಡಿ ಮಹಿಳೆಯ ಕೊಲೆ

ಕೊರಟಗೆರೆ : ತಾಲ್ಲೂಕಿನ‌ ಹೊಳವನಹಳ್ಳಿ ಹೋಬಳಿಯ ಚಿಕ್ಕಾವಳ್ಳಿ ಗ್ರಾಮದಲ್ಲಿ ಒಂಟಿ‌ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಬಲತ್ಕಾರ ಮಾಡಿ ಕೊಲೆ ಮಾಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ವಿಚಾರಿಸಲಾಗಿ ಸಾವಿತ್ರಮ್ಮ(55)ವರ್ಷದ ಮಹಿಳೆ ರಾಗಿ ಹಿಟ್ಟು ಆಡಿಸಲು ಹೋಗುವ ಸಂಧರ್ಭದಲ್ಲಿ ಹಿಂಬಾಲಿಸಿ ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಬಲತ್ಕಾರ ಮಾಡಿರುವುದು ತಿಳಿದುಬಂದಿದೆ.

Crime

ನಂತರ ಘಟನಾ ಸ್ಥಳಕ್ಕೆ ಶ್ವಾನದಳದ ತಂಡ ಬಂದು ಸ್ಥಳಪರಿಶೀಲನೆ ಮಾಡಲಾಗಿ ಆರೋಪಿ ಕಂಡು ಹಿಡಿಯಲು ಸಹಾಯವಾಗಿದೆ.

ಇದೇ ಗ್ರಾಮದ ಮಲ್ಲಿಕಾರ್ಜುನಾ ಎಂಬಾತ ಈ ಕೃತ್ಯ ಮಾಡಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾಸ್ಪತ್ತೆಗೆ ರವಾನಿಸಲಾಗಿದೆ

ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಮಧುಗಿರಿ ಉಪ ಅಧೀಕ್ಷಕ ವೆಂಕಟೇಶ್ ನಾಯ್ಡು,ಸಿಪಿಐ ಸುರೇಶ್ ಕೆ, ಪಿಎಸ್ ಐ ಪ್ರದೀಪ್ ಸಿಂಗ್, ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Verified by MonsterInsights